ತಾಜಾ ಸುದ್ದಿ

ಆಪರೇಷನ್ ಹಸ್ತ ಭೀತಿ..ಜೆಡಿಎಸ್​​ ಫುಲ್​ ಅಲರ್ಟ್​: ರಾಜ್ಯಾಧ್ಯಕ್ಷರ ಆಯ್ಕೆಗೆ ಮುಹೂರ್ತ ಫಿಕ್ಸ್

ಲೋಕಸಭೆ ಚುನಾವಣೆಗೆ ದೋಸ್ತಿ ದೋಸ್ತಿ ಎಂದು ಹೋರಾಡಿದ್ರು. ಅದರಂತೆಯೇ ಲೋಕಸಭೆ ಚುನಾವಣೆಯಲ್ಲೂ ಭರ್ಜರಿ ಗೆಲುವನ್ನೇ ಸಾಧಿಸಿದ್ರು. ಇದೀಗ ಮೈತ್ರಿಯೇ ಜೆಡಿಎಸ್​ಗೆ ಕುತ್ತು ತಂತಾ ಅನ್ನೋ ಅನುಮಾನ ಜೆಡಿಎಸ್​ ನಾಯಕರಲ್ಲೇ ಶುರುವಾಗಿದೆ. ಇದೇ ವಿಚಾರವಾಗಿಯೇ ಜೆಡಿಎಸ್​ ನಾಯಕರಲ್ಲೇ ಭಿನ್ನರಾಗ ಭುಗಿಲೆದ್ದಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿನ ಬಳಿಕ ದಳ ಮನೆಯಲ್ಲಿ ತಳಮಳ ಶುರುವಾಗಿದೆ. ಒಂದ್ಕಡೆ ಹೆಚ್​ಡಿಕೆ ವಿರುದ್ಧ ಕೆಲವರು ಅಸಮಾಧಾನ ಹೊರಹಾಕ್ತಿದ್ರೆ, ಜೆಡಿಎಸ್​ ಭಿನ್ನರಾಗವೇ ಆಪರೇಷನ್​ ಹಸ್ತಕ್ಕೆ ಅನುಕೂಲ ಆಯ್ತಾ ಅನ್ನೋ ಚರ್ಚೆ ಹುಟ್ಟುಹಾಕಿದೆ. ಆಪರೇಷನ್ ಹಸ್ತದ ಬಗ್ಗೆ ಮುನ್ಸೂಚನೆ ಸಿಕ್ಕಿರೋ ದಳಪತಿಗಳು ಇದೀಗ ಎಚ್ಚೆತ್ತುಕೊಂಡಿದ್ದು, ಸಭೆಯೂ ನಡೆಸಿದ್ದಾರೆ.

ಬೆಂಗಳೂರು, (ಜನವರಿ 12): ಬಿಜೆಪಿಯಲ್ಲಿನ ಬಣ ಬಡಿದಾಟದಂತೆಯೇ, ದಳ ಮನೆಯಲ್ಲೂ ಅಸಮಾಧಾನ ಇದೆ. ಬಿಜೆಪಿ ಜೊತೆ ಮೈತ್ರಿಯನ್ನೇ ಶಾಸಕ ಜಿಟಿ.ದೇವೇಗೌಡ ಬಹಿರಂಗವಾಗಿಯೇ ವಿರೋಧ ಮಾಡಿದ್ರು, ಇದಿಷ್ಟೇ ಅಲ್ಲ, ಇದೀಗ ಜೆಡಿಎಸ್​ ರಾಜ್ಯಾಧ್ಯಕ್ಷ ಪಟ್ಟಕ್ಕೆ ನಿಖಿಲ್​ ಕುಮಾರಸ್ವಾಮಿಯನ್ನ ಕೂರಿಸಲು ದೇವೇಗೌಡರು ಪ್ರಯತ್ನದಲ್ಲಿದ್ದಾರೆ. ಇದು ಜೆಡಿಎಸ್ ಹಿರಿಯ ನಾಯಕರ ಕಣ್ಣು ಕೆಂಪಗಾಗಿಸಿದೆ. ಹಿರಿಯರ ಕಡೆಗಣನೆ ಎಂದು ಆಕ್ರೋಶಕ್ಕೂ ಕಾರಣವಾಗಿದೆ. ದಳ ಮನೆಯಲ್ಲಿನ ಭಿನ್ನರಾಗವೇ ಆಪರೇಷನ್​ ಹಸ್ತಕ್ಕೆ ಚಾನ್ಸ್ ಕೊಟ್ಟಂತಾಗುತ್ತೆ ಅನ್ನೋ ಭಯದಲ್ಲಿರೋ ಕುಮಾರಸ್ವಾಮಿ ಮುನ್ನೆಚ್ಚರಿಕೆಯಾಗಿ ಸಭೆ ಮಾಡೋ ಮೂಲಕ ವಿಶ್ವಾಸಕ್ಕೆ ತೆಗೆದಕೊಳ್ಳೋ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್​ ನಾಯಕರ ಆಟಕ್ಕೆ ಬ್ರೇಕ್ ಹಾಕುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ.

Share the Post:

Related Post